ಬಿಜೆಪಿ ತೆಕ್ಕೆಯಲ್ಲಿರುವ ಮತ್ತೊಂದು ಲೋಕಸಭಾ ಕ್ಷೇತ್ರ ಬಾಗಲಕೋಟೆ. ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನ ನೀಡಿದ ಹಾಗೂ 4 ಸಿಎಂಗಳಿಗೆ ರಾಜಕೀಯ ನೆಲೆ ಕಲ್ಪಿಸಿದ ಹೆಗ್ಗಳಿಕೆ ಬಾಗಲಕೋಟೆ ಜಿಲ್ಲೆಗಿದೆ. ಮೊದಲೆನೆಯದ್ದಾಗಿ ಎಸ್. ನಿಜಲಿಂಗಪ್ಪ ಅವರು ಇಲ್ಲಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಮುಖ್ಯಮಂತ್ರಿ ಕೂಡಾ ಆಗಿದ್ದರು. ಅವರ ಬಳಿಕ ವೀರೇಂದ್ರ ಪಾಟೀಲ್ ಅವರು 1980ರಲ್ಲಿ ಸ್ವಕ್ಷೇತ್ರ ಕಲಬುರಗಿ ಬಿಟ್ಟು ಬಾಗಲಕೋಟೆಯಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇದಾದ ನಂತರ ಕಣಕ್ಕೆ ಇಳಿದವರು ರಾಮಕೃಷ್ಣ ಹೆಗಡೆ. ಇಲ್ಲಿನ ಕೆಲವು ಆತ್ಮೀಯರ ಮಾತಿಗೆ ಕಟ್ಟು ಬಿದ್ದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಸಿದ್ದು ...
ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಮೊದಲಿನಿಂದಲೂ ಸವಾಲಾಗಿ ನಿಂತಿರೋದು ದಾವಣಗೆರೆ ಲೋಕಸಭಾ ಕ್ಷೇತ್ರ. ಈ ಕ್ಷೇತ್ರ ಕಾಂಗ್ರೆಸ್ಗೆ ಕಬ್ಬಿಣದ ಕಡಲೆಯಂತೆ. ಯಾಕೆಂದರೆ 1996ರಿಂದ ಒಂದು ಸಾರಿ ಜಯಿಸಿದ್ದು ಬಿಟ್ಟರೆ ಸತತ 25 ವರ್ಷಗಳಿಂದ ಕಾಂಗ್ರೆಸ್ ಇಲ್ಲಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಇನ್ನು 2004ರಿಂದ ಈ ಕ್ಷೇತ್ರದಲ್ಲಿನ ನಾಲ್ಕು ಬಾರಿ ಸತತವಾಗಿ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಗೆದ್ದಿದ್ದಾರೆ. ಆದರೆ ಈ ಬಾರಿ ಬಿಜೆಪಿಯ ಒಳಜಗಳದಿಂದಾಗಿ ಸಿದ್ದೇಶ್ವರ್ಗೆ ಟಿಕೆಟ್ ಕೈತಪ್ಪಬಹುದು ಎನ್ನಲಾಗಿತ್ತು. ಅದೇ ರೀತಿ ಅವ್ರಿಗೆ ಟಿಕೆಟ್ ತಪ್ಪಿದೆ. ಆದ್ರೆ ಸಿದ್ದೇಶ್ವರ್ ತಮ್ಮ ಟಿಕೆಟ್ ಅನ್ನು ತಮ್ಮ ಪತ್ನಿ ಗಾಯತ್ರಿ ...
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 2014 ಹಾಗೂ 2019ರ ಚುನಾವಣೆಗಳಲ್ಲಿ ಕರಡಿ ಸಂಗಣ್ಣ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸತತವಾಗಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಎರಡೂ ಚುನಾವಣೆಗಳಲ್ಲಿ ಕರಡಿ ಸಂಗಣ್ಣರಿಗೆ 30 ಸಾವಿರ ಮತಗಳ ಆಸುಪಾಸಿನ ಅಂತರದಿಂದ ಗೆಲುವು ದಕ್ಕಿತ್ತು. ಈ ಬಾರಿಯೂ ಅವ್ರಿಗೆ ಟಿಕೆಟ್ ಕೊಡ್ತಾರೆ ಅನ್ನೋ ನಿರೀಕ್ಷೆಯಲ್ಲಿ ಅವರ ಬೆಂಬಲಿಗರಿದ್ದರು. ಆದರೆ ಬಿಜೆಪಿ ಸಂಗಣ್ಣ ಅವರ ಬದಲಿಗೆ ಕುಷ್ಟಗಿ ಮಾಜಿ ಶಾಸಕ ಕೆ. ಶರಣಪ್ಪ ಪುತ್ರ, ವೃತ್ತಿಯಿಂದ ವೈದ್ಯರಾಗಿರುವ ಬಸವರಾಜ ಕ್ಯಾವಟರ್ ಅವರನ್ನ ಕಣಕ್ಕಿಳಿಸಿದೆ. ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ್ ಹಿಟ್ನಾಳ್ ...
ರಾಜ್ಯದಲ್ಲಿ ಎರಡನೆ ಹಂತದಲ್ಲಿ ನಡೀತಿರೋ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಕುತೂಹಲ ಭರಿತ ಕ್ಷೇತ್ರಗಳಿವೆ. ಒಂದೆರಡು ಲೋಕಸಭಾ ಕ್ಷೇತ್ರಗಳನ್ನ ಹೊರತು ಪಡಿಸಿದ್ರೆ ಇನ್ನು ಮಿಕ್ಕ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಕಣ ಏರ್ಪಟ್ಟಿದೆ. ಅದರಲ್ಲೂ ಹಾವೇರಿಯಲ್ಲಿ ಮಗನಿಗೆ ಟಿಕೆಟ್ ಸಿಕ್ಕಿಲ್ಲ ಅನ್ನೋ ಕಾರಣವನ್ನಿಟ್ಟುಕೊಂಡು, ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡ್ತಿದ್ದಾರೆ. ಈ ಮೂಲಕ ಶಿವಮೊಗ್ಗದಲ್ಲಿ ಬಿಜೆಪಿಯ ಅಭ್ಯರ್ಥಿ ಹಾಗೂ ಯಡಿಯೂರಪ್ಪನವ್ರ ದೊಡ್ಡ ಮಗ ಬಿವೈ ರಾಘವೇಂದ್ರ ಅವ್ರ ಗೆಲುವಿಗೆ ತೊಡಕಾಗುವ ಉಮೇದಿನಲ್ಲಿದ್ದಾರೆ. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಅವ್ರೇ ನಿರಂತರವಾಗಿ ಗೆದ್ದು ...
ಮಾಜಿ ಮುಖ್ಯಮಂತ್ರಿಗಳ ಕುಟುಂಬ ರಾಜಕಾರಣದಿಂದಾಗಿ ಸದಾ ಗಮನ ಸೆಳೆಯೋ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರ. ಈ ಬಾರಿ ಈ ಲೋಕಸಭಾ ಕ್ಷೇತ್ರ ಬಿ. ಎಸ್. ಯಡಿಯೂರಪ್ಪ ವರ್ಸಸ್ ಕೆ. ಎಸ್. ಈಶ್ವರಪ್ಪ ಅನ್ನೋ ಕಾರಣದಿಂದಾಗಿ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಸಮಾಜವಾದಿ ಸಿದ್ದಾಂಥದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರುಪತ್ಯವನ್ನ ಸಾಧಿಸಿತ್ತು. ಆದರೆ ಕಳೆದ ಎರಡು ದಶಕಗಳಿಂದ ಇದು ಬಿಜೆಪಿ ಭದ್ರಕೋಟೆ ಅನ್ನಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಸಾಗರ ವಿಧಾನಸಭಾ ಕ್ಷೇತ್ರಗಳ ಜೊತೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ...
ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗಳು ನಡೆಯಲಿರುವ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲಕ್ಕೆ ಕಾರಣವಾಗ್ತಿರೋ ಕ್ಷೇತ್ರಗಳ ಪೈಕಿ ಬೆಳಗಾವಿ ಕೂಡಾ ಒಂದು. ಬೆಳಗಾವಿ ಅಂದ ಕೂಡಲೇ ನೆನೆಪಾಗೊದು ಗಡಿ ಗಲಾಟೆ. ಕನ್ನಡಿಗ ಹಾಗೂ ಮರಾಠಿಗ ಅನ್ನೋ ಸಂಘರ್ಷ ಅಲ್ಲಿ ಇದ್ದೇ ಇರುತ್ತೆ. ಆದ್ರೆ ಅಲ್ಲಿನ ರಾಜಕಾರಣಿಗಳು ಮಾತ್ರ ಈ ಗಲಾಟೆಯನ್ನೇ ಬಂಡವಾಳ ಮಾಡ್ಕೊಂಡು ಗೆದ್ದು ಬರ್ತಿದ್ದಾರೆ. ಬೆಂಗಳೂರಿನ ನಂತರ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರೋದು ಬೆಳಗಾವಿ ಜಿಲ್ಲೆ. ಹಾಗಾಗಿನೇ ಈ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ಬೆಳಗಾವಿ ಹಾಗು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಸೇರಿರೋದಲ್ಲದೇ ...
ಕುಟುಂಬ ರಾಜಕಾರಣದಿಂದಾಗಿ ಗಮನಸೆಳೆದಿರೋ ಲೋಕಸಭಾ ಕ್ಷೇತ್ರಗಳ ಪೈಕಿ ಚಿಕ್ಕೋಡಿ ಕೂಡಾ ಒಂದು. ಇಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ನಾ ಸಾಹೇಬ್ ಜೊಲ್ಲೆ ಕಣದಲ್ಲಿದ್ರೆ, ಕಾಂಗ್ರೆಸ್ನಿಂದ ಸಚಿವ ಸತೀಶ್ ಜಾರಕಿಹೊಳಿ ಅವ್ರ ಪುತ್ರಿ ಪ್ರಿಯಾಂಕರನ್ನ ಕಣಕ್ಕಿಳಿಸಲಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಟ ಏರ್ಪಡ್ತಾ ಇದ್ದು ಗೆಲವು ಯಾರ ಕೊರಳಿಗೆ ಅನ್ನೋ ಕುತೂಹಲ ಹೆಚ್ಚಾಗ್ತಾ ಇದೆ. ಬೆಳಗಾವಿಯಲ್ಲಿ ಲಿಂಗಾಯತ ವರ್ಸಸ್ ಲಿಂಗಾಯತ ಆದ್ರೆ ಇಲ್ಲಿ ಜಾರಕಿಹೊಳಿ ವರ್ಸಸ್ ಲಿಂಗಾಯತ ಅನ್ನೋ ಪರಿಸ್ಥಿತಿ ಇದೆ. ಈ ಕ್ಷೇತ್ರದ ವ್ಯಾಪ್ತಿಗೆ ಅಥಣಿ, ಚಿಕ್ಕೋಡಿ ಸದಗಲ, ನಿಪ್ಪಾಣಿ, ...
ಕಳೆದ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷರ ಸೋಲಿನ ಕಾರಣದಿಂದಾಗಿ ಗಮನೆ ಸೆಳೆದಿದ್ದ ಕ್ಷೇತ್ರ ಕಲಬುರಗಿ. ಕಾಂಗ್ರೆಸ್ನ ಭದ್ರ ಕೋಟೆ ಅನ್ನಿಸಿಕೊಂಡಿದ್ದ ಈ ಕ್ಷೇತ್ರವನ್ನು 2019ರಲ್ಲಿ ಬಿಜೆಪಿ ಕಿತ್ತುಕೊಳ್ತು. ಅವತ್ತು ಬಿಜೆಪಿ, ಮಲ್ಲಿಕಾರ್ಜು ಖರ್ಗೆ ಅವ್ರ ವಿರುದ್ಧ ಕಾಂಗ್ರೆಸ್ನಲ್ಲಿ ಶಾಸಕರಾಗಿದ್ದು ಬಿಜೆಪಿಗೆ ಬಂದಿದ್ದ ರಮೇಶ್ ಜಾದವ್ ಅವರನ್ನು ಕಣಕ್ಕಿಳಿಸಿ ಚುನಾವಣೆಯಲ್ಲಿ ಖರ್ಗೆ ಅವ್ರನ್ನ ಸೋಲಿಸಿತ್ತು. ಈಗ ಕಾಂಗ್ರೆಸ್ ಪಕ್ಷ ಮತ್ತೆ ಕಲಬುರಗಿ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳೋದಕ್ಕೆ ನಿರ್ಧಾರ ಮಾಡಿದಂತಿದೆ. ಇಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವ್ರಿಗೆ ಟಿಕೆಟ್ ಕೊಟ್ಟಿದೆ. ಇಲ್ಲಿ ...
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಅಂತರದಲ್ಲಿ ಗೆದ್ದಿದ್ದ ಕ್ಷೇತ್ರಗಳ ಪೈಕಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಕೂಡಾ ಒಂದು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅನಂತ್ ಕುಮಾರ್ ಹೆಗಡೆ ಸುಮಾರು 4,79,649 ಮತಗಳ ಅಂತರದಿಂದ ಗೆದ್ದು, ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಆ ಮೂಲಕ ಮತ್ತೊಮ್ಮೆ ಬಿಜೆಪಿ, ಇದು ತನ್ನ ಭದ್ರಕೋಟೆ ಅನ್ನೋದನ್ನೂ ನಿರೂಪಿಸಿತ್ತು. ಈ ಬಾರಿ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಬದಲಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿ ಕಣದಲ್ಲಿದ್ದಾರೆ. ಸತತವಾಗಿ ರಾಜ್ಯವಿಧಾನಸಭೆಗೆ ಅವರನ್ನ ಆರಿಸಿ ...
ಬಿಜೆಪಿಯ ಅಚ್ಚರಿಯ ನಡೆಗೆ ಕಾರಣವಾಗಿರುವ ಕ್ಷೇತ್ರಗಳ ಪೈಕಿ ಒಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರ. ಸದ್ಯಕ್ಕೆ ಇಲ್ಲಿ ಹಾಲಿ ಸಂಸದರಾಗಿದ್ದಿದ್ದು ಪ್ರತಾಪ್ ಸಿಂಹ. ಆದರೆ ಈ ಬಾರಿ ಬಿಜೆಪಿ ಅವ್ರಿಗೆ ಟಿಕೆಟ್ ನಿರಾಕರಿಸಿದೆ. ಪ್ರತಾಪ್ ಸಿಂಹ ಬದಲಾಗಿ ಅಲ್ಲಿ ಯದುವೀರ್ ಒಡೆಯರ್ ಅವ್ರಿಗೆ ಟಿಕೆಟ್ ನೀಡಲಾಗಿದೆ. ಪ್ರತಾಪ್ ಸಿಂಹ ಕೂಡಾ ಪಕ್ಷ ನಿಷ್ಟರಂತೆ ಯದುವೀರ್ ಒಡೆಯರ್ ಪರವಾಗಿ ಕೆಲಸ ಮಾಡ್ತಿದ್ದಾರೆ. ಯದುವೀರ್ ಅವ್ರು ರಾಜ ಮನೆತನಕ್ಕೆ ಸೇರಿದವರು ಅನ್ನೋ ಹೆಗ್ಗಳಿಕೆಯ ಜೊತೆಗೆ ಉತ್ತಮ ಹಾಗೂ ಸರಳ ವ್ಯಕ್ತಿತ್ವದವ್ರು ಅನ್ನೋ ಬಲ ಅವರಿಗಿದೆ. ಮೈಸೂರು ಕೊಡಗು ...












